Monday, July 30, 2012

Book review of 'Kamaladevi Chattopadhyaya' written by Dr. Jyotsna Krishnanada Kamath 
in Vijaya Karnataka on July 29, 2012


Click on the image to enlarge
ನಮ್ಮ ಮುಂದಿನ ಪ್ರಕಟಣೆ " ಭವಿಷ್ಯದ ಭರವಸೆ : ಹಸಿರು ಇಂಧನ

 


ಪುಸ್ತಕದ ಮಾದರಿ ಪುಟಗಳಿಗೆ ಇಲ್ಲಿ ಚಿಟಿಕೆ ಹೊಡೆಯಿರಿ
ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ

Tuesday, July 17, 2012

"ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ" ಪುಸ್ತಕದ ಪರಿಚಯ ಇಂದಿನ ಉದಯವಾಣಿ ಮತ್ತು ಸುದ್ದಿಗಿಡುಗ ಪತ್ರಿಕೆಗಳಲ್ಲಿ



Monday, July 16, 2012

Book review of 'Sankalpa', 'Tuluvara Moolatana : Adi - Alade' and 'Nadedastoo Nadu' in Samyukta Karnataka 

 


ವಿಜಯವಾಣಿ ಪತ್ರಿಕೆಯಲ್ಲಿ ರಹಮತ್ ತರೀಕೆರೆಯವರ ’ನಡೆದಷ್ಟೂ ನಾಡು’ ಪುಸ್ತಕದ ವಿಮರ್ಶೆ



Thursday, July 12, 2012

ನಮ್ಮ ಪ್ರಕಾಶನದ ಮುಂದಿನ ಪ್ರಕಟಣೆಗಳ ಮಾದರಿ ಪುಟಗಳು


Wednesday, July 11, 2012

ನವಕರ್ನಾಟಕದ ಮುಂದಿನ ಪ್ರಕಟಣೆ 'ಪರಮಾಣು ನ್ಯೂಕ್ಲಿಯಸ್' ಮಾದರಿ ಪುಟಗಳು 


ನವಕರ್ನಾಟಕದ ಮುಂದಿನ ಪ್ರಕಟಣೆ ‘ವಿದ್ಯುನ್ಮಾನ ವಿದ್ಯಮಾನಗಳು’ ಪುಸ್ತಕದ ಮಾದರಿ ಪುಟಗಳು

Tuesday, July 10, 2012

ಪ್ರಶಸ್ತಿ ಪುರಸ್ಕೃತ ಕೃತಿ ‘ವರ್ಣಮಾಯಾಜಾಲ’ದ ಪತ್ರಿಕಾ ವಿಮರ್ಶೆ

Thursday, July 5, 2012

ಪುಸ್ತಕ ಪ್ರಿಯರೆ,

ಡಾ|| ಎನ್. ಎಸ್. ಲೀಲಾ ಅವರ ’ವರ್ಣ ಮಾಯಾಜಾಲ’ ಪುಸ್ತಕಕ್ಕೆ ಕರ್ನಾಟಕ ಸಂಘ, ಶಿವಮೊಗ್ಗ ಇವರ "ಹಸೂಡೀ ವೆಂಕಟಶಾಸ್ತೀ ವಿಜ್ಞಾನ ಸಾಹಿತ್ಯ ಪ್ರಶಸ್ತಿ 2011" ಲಭಿಸಿದೆ.


ಪುಸ್ತಕದ ಬಗ್ಗೆ :

ಬೆಳಕಿನ ಹಲವು ಅಂಶಗಳನ್ನು ವಿವರಿಸುವ ಈ ಪುಸ್ತಕ ವರ್ಣ ಜಗತ್ತಿಗೊಂದು ಕೈಪಿಡಿಯಂತಿದೆ. ಜೀವಿ-ಅಜೀವಿಗಳನ್ನೂ ಅವುಗಳಿಂದಾಗಿ ರೂಪು ತಳೆದಂತಿರುವ ವ್ಯೋಮವೂ ನಮ್ಮ ಮನಸ್ಸಿನಲ್ಲಿ ಜಗತ್ತಿನ ಚಿತ್ರಣವೊಂದನ್ನು ನೇಯುತ್ತವೆ. ನಾವು ನೋಡುವ ಯಾವುದೇ ವಸ್ತು ತನ್ನ ಆಕಾರ, ಗಾತ್ರ ಮತ್ತು ಬಣ್ಣಗಳಿಂದ ನಮಗೆ ಕಾಣಿಸುತ್ತದೆ. ಬಣ್ಣವಿಲ್ಲದ ವಸ್ತುವೊಂದನ್ನು ಕಲ್ಪಿಸುವುದಕ್ಕೂ ಕಷ್ಟ. ಲೇಖಕಿಯವರಾದ ಡಾ|| ಎನ್. ಎಸ್. ಲೀಲಾ ಅವರು ತನ್ನ ಈ ಕೃತಿಯಲ್ಲಿ ಬಣ್ಣದ ಗುಣಗಳನ್ನು ನಮ್ಮ ಜೀವನದ ಎಲ್ಲ ಮಗ್ಗುಲುಗಳಲ್ಲಿ ಅದು ಹರಡಿರುವುದನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಬೆಳಕಿಲ್ಲದೆ ಬಣ್ಣವಿಲ್ಲ. ಜಗತ್ತಿಗೆ ಬೆಳಕು ಕೊಡುವ ಸೂರ್ಯನ ಕುರಿತಾದ ಸುಂದರ ಉಲ್ಲೇಖಗಳಿಂದ ಕೃತಿಯು ಪ್ರಾರಂಭವಾಗುತ್ತದೆ. ದೃಷ್ಟಿ ಪ್ರಕ್ರಿಯೆ, ಅದರಲ್ಲಿ ಕಣ್ಣಿನ ಪಾತ್ರ, ದೃಷ್ಟಿ ಸೂಚನೆಯಲ್ಲಿ ಮಿದುಳಿನ ಕೆಲಸ ಹಾಗೂ ಈ ಎಲ್ಲ ವಿದ್ಯಮಾನಗಳ ಬಗ್ಗೆ ನಡೆದ ಮಹತ್ವದ ಸಂಶೋಧನೆಗಳನ್ನು ಲೇಖಕಿಯವರು ವಿಶ್ಲೇಷಿಸುತ್ತಾರೆ. ಬಣ್ಣದ ಗ್ರಹಿಕೆಯನ್ನು ಪ್ರಭಾವಿಸುವ ಹಲವು ಅಂಶಗಳಿವೆ. ವಸ್ತುವಿನದ್ದೇ ಆದ ಸಂಯೋಜನೆ, ಅದರ ಮೇಲೆ ಬೀಳುವ ಬೆಳಕು, ವಸ್ತುವಿನ ಹಿನ್ನೆಲೆ ಹಾಗೂ ವೀಕ್ಷಕನ ನೆಲೆ-ಸ್ಥಾನಗಳೆಲ್ಲ ಇಂಥ ಗ್ರಹಿಕೆಯನ್ನು ರೂಪಿಸುತ್ತವೆ. ಸಾಗರ, ಆಕಾಶ, ಮರ, ಎಲೆ, ಹೂ, ಧ್ರುವ ಪ್ರಭೆ, ಪಾತರಗಿತ್ತಿ, ರಕ್ತ ಹಾಗೂ ಇನ್ನಿತರ ಅನೇಕ ವಸ್ತುಗಳ ಉದಾಹರಣೆಗಳೊಂದಿಗೆ ಇದು ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ, ನಮ್ಮ ದೈನಂದಿನ ಚಟುವಟಿಕೆಗಳಲ್ಲೂ ಬಣ್ಣಗಳು ಪಾತ್ರ ವಹಿಸುತ್ತವೆ. ಅಲಂಕರಣ, ಹಬ್ಬ-ಹರಿದಿನಗಳಲ್ಲಿ ಇದು ಎದ್ದು ಕಾಣಿಸುತ್ತದೆ. ಹವಾಮಾನ ಬದಲಾವಣೆಯಿಂದ ಹವಳದ ದಿಬ್ಬಗಳಂಥ ಪ್ರಾಕೃತಿಕ ವಸ್ತುಗಳು ಅನುಭವಿಸುವ ಬಣ್ಣಗೇಡು ಮತ್ತು ಆರೋಗ್ಯ - ಅನಾರೋಗ್ಯಗಳ ತಪಾಸಣೆಯಲ್ಲಿ ಸೂಚಕವಾಗುವ ಬಣ್ಣ ಬದಲಾವಣೆ - ಇವೆಲ್ಲವನ್ನೂ ಬರಹವು ಒಳಗೊಂಡಿದೆ. ಈ ಕೃತಿಯು ವರ್ಣಚಿತ್ರಗಳೊಂದಿಗೆ ಬಣ್ಣಗಳ ಸಮಗ್ರ ಚಿತ್ರಣವನ್ನು ಮೈಗೂಡಿಸಿಕೊಂಡಂತಿದೆ.

ಈ ಪುಸ್ತಕವು ನವಕರ್ನಾಟಕದ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಹಾಗೂ ಪ್ರದರ್ಶನಗಲಲ್ಲಿ ಲಭ್ಯ. ನಿಮ್ಮ ಸ್ಥಳೀಯ ಪುಸ್ತಕದಂಗಡಿಗಳಲ್ಲಿ ವಿಚಾರಿಸಿ ನೋಡಿ. ಲಭ್ಯವಿಲ್ಲದೆ ಹೋದಲ್ಲಿ ನೇರವಾಗಿ ನಮ್ಮನ್ನು ಸಂಪರ್ಕಿಸಿ, ಇಲ್ಲವೇ ನಮ್ಮ ವೆಬ್‌ಸೈಟ್‌ ಮೂಲಕ Onlineನಲ್ಲಿ Flipkart.comಗೆ ಬೇಡಿಕೆ ಸಲ್ಲಿಸಿ. ಪುಸ್ತಕಗಳು ನಿಮ್ಮ ಮನೆ ಬಾಗಿಲಿಗೆ ತಲಪುತ್ತವೆ.

ನಮ್ಮ ವಿಳಾಸ :
Navakarnataka Publications Private Limited
Embassy Centre, Crescent Road,
Kumara Park East, P.B. No. 5159,
Bengaluru - 560 001 ( India )
Phone : 080 3057 8022 / 2220 3580
Fax     : 080 3057 8023

Tuesday, July 3, 2012